Friday, September 22, 2017

ಹತ್ತು ಕೋಟಿಯಾದರೇನು? ಸಿದ್ದ! ಲಕ್ಷ ಕೋಟಿಯಾದರೇನು ಸಿದ್ದ! ನಾವು ನುಂಗೊದಂತು ಶತಃಸಿದ್ದ!!

                                                           ದೇವರಾಜಾರಸ್.ಕಂ  ಮಾರಾಟಕ್ಕಿದೆ


ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ 'ಭೂಸುಧಾರಣೆಯ ಹರಿಕಾರ' ಎಂದು ಕರೆಯಲ್ಪಡುವವರು ಡಿ.ದೇವರಾಜ್ ಅರಸ್. ಅದುವರೆಗಿನ ಅನೇಕ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದ ಹಿಂದುಳಿದ-ಶೋಷಿತ ವರ್ಗಗಳಿಗಾಗಿ, ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದ ಇವರು ಹಿಂದುಳಿದ ವರ್ಗಗಳ ಹರಿಕಾರರೆಂದು ಹೆಸರಾದವರು. ಮೈಸೂರಿನ ಕಲ್ಲಹಳ್ಳಿಯಲ್ಲಿ 20-08-1915 ರಂದು ಜನಿಸಿದ ಅರಸ್, ಎಸ್.ನಿಜಲಿಂಗಪ್ಪ ನಂತರ ಅತಿ ಹೆಚ್ಚು ಅವಧಿಗೆ (1972-80) ಮುಖ್ಯಮಂತ್ರಿಯಾದವರು. ವೃಕ್ಷ ಸಂರಕ್ಷಣಾ ಯೋಜನೆ, ಜೀತ ಪದ್ಧತಿ ನಿಷೇಧ, ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಮೊದಲಾದವನ್ನು ಜಾರಿಗೆ ತಂದು ಜನಮಾನಸದಲ್ಲಿ ನೆಲೆಯಾದರು. ಇಂದು ಬೆಂಗಳೂರಿನಲ್ಲಿ ಅನೇಕ ವಿದೇಶಿ ಕಂಪೆನಿಗಳು ಇರುವ, ರಾಜ್ಯಕ್ಕೆ ಕೊಟ್ಯಾಂತರ ರೂ. ಆದಾಯ ನೀಡುತ್ತಿರುವ ಇಲೆಕ್ಟ್ರಾನಿಕ್ ಸಿಟಿಯ ನಿರ್ಮಾತೃ. ಸ್ವಪಕ್ಷಿಯರಿಂದಲೇ ವಿರೋಧವಿದ್ದರೂ, ಜಾರಿಗೆ ತಂದ  ಭೂಸುಧಾರಣಾ ಕಾಯಿದೆ ಹಾಗೂ ಅದರ ವ್ಯಾಜ್ಯ ವನ್ನು ಬಗೆಹರಿಸಲು ಭೂಸುಧಾರಣಾ ನ್ಯಾಯಮಂಡಲಿ ಸ್ಥಾಪಿಸಿದರು. ಅ ಕಾಲದಲ್ಲಿ ಕರ್ನಾಟಕ ಕಾಂಗ್ರೆಸ್ ನ ಬಹುದೊಡ್ಡ ನಾಯಕರಾಗಿ ಮೆರೆದರೂ ಕೊನೆಗೆ ಇಂದಿರಾಗಾಂಧಿಯ ವಿರೋಧ ಕಟ್ಟಿಕೊಂಡು ರಾಜಕೀಯವಾಗಿ ಮೂಲೆಗುಂಪಾದರು. ಕೊನೆಗೆ 1982 ರ ಜೂನ್ 6 ರಂದು ವಿಧಿವಶರಾದರು.


1915 ರಲ್ಲಿ ಜನಿಸಿದ ಅರಸರ ಜನ್ಮ ಶತಮಾನದ ಅಚರಣೆಗೆ, ಅವರ ಹಾದಿಯಲ್ಲಿಯೇ ನಡೆಯಬೇಕೆಂದುಕೊಂಡಿರುವ ಇಂದಿನ ಘನ(!) ಸರ್ಕಾರ, ಅರಸರ ಕುರಿತಾಗಿ ಸಮಗ್ರ ಮಾಹಿತಿಯನ್ನು ಒಳಗೊಂಡ ವೆಬ್ಸೈಟ್ ಒಂದನ್ನು ಆರಂಭಿಸಿತು. ಜೂನ್ 6ರಂದು ಇದನ್ನು ಲೋಕಾರ್ಪಣೆ ಮಾಡಿದವರು, ಘನ ಸರ್ಕಾರದ ಸಮಾಜಕಲ್ಯಾಣ ಮಂತ್ರಿಗಳು. ಈಗ ಆಗಸ್ಟ್ 17, ನಾಳೆ ಅರಸರ ಪುಣ್ಯತಿಥಿ. ಅರಸರ ನೆನಪಿಗೆ ಅರಂಭಿಸಿದ "www.devrajurs.com" ಎನ್ನುವ ನಾಮಪದ ಈಗ ಮಾರಾಟಕ್ಕೆ ಇದೆ, ಅದು ಕೂಡ ಕೇವಲ 577 ರೂ ಗಳಿಗೆ. ಎಕರೆಗಟ್ಟಲೆ ಭೂಮಿಯನ್ನು ರೈತರಿಗೆ ಒದಗಿಸಿದ ಅರಸರಿಗೆ ಅಂತರ್ಜಾಲದಲ್ಲೊಂದು ಜಾಗವಿಲ್ಲ. ದೇವರಾಜಾರಸ್.ಕಂ ಎನ್ನುವ ಜಾಲತಾಣ,ಇಂದು ಅಂತರ್ಜಾಲದಲ್ಲಿ ಕಾಣಿಸುತ್ತಿಲ್ಲ.ಅಲ್ಲಿಗೆ ಅರಸು ಅವರ ಸಾಧನೆಯನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಲು ಸರ್ಕಾರದ ಪ್ರಯತ್ನ ವ್ಯರ್ಥವಾಯಿತು. ಜಾಲತಾಣ ಸ್ಥಗಿತಗೊಂಡರೆ ಹೊಗಲೀ, ಕನಿಷ್ಟ ಪಕ್ಷ  ಹೆಸರನ್ನಾದರು (Domain Name)  ಉಳಿಸಿಕೊಳ್ಳುವ ಕಾಳಜಿ ತೊರಲಿಲ್ಲ.



ತಲೆಬರಹಕ್ಕೂ -ಲೇಖನಕ್ಕೂ ಸಂಬಂಧವಿಲ್ಲ ಅಂದುಕೊಳ್ಳಬೇಡಿ; ಸಂಬಂಧ ಇದೆ. ವಾರದ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಜಾಲತಾಣ ಕಾಲಕಾಲಕ್ಕೆ ಅಪ್ಡೇಟ್ (Update) ಅಗುತ್ತಿಲ್ಲ ಎಂದು ಚರ್ಚೆಯಾಯಿತು (ಅದು ಕೂಡ ಎರಡು ವರ್ಷಗಳಿಂದ).  ಆಗ ಪ್ರವಾಸೋದ್ಯಮ ಇಲಾಖೆಯ ಆಧಿಕಾರಿಗಳು ಉತ್ತರಿಸಿ, "ಜಾಲತಾಣವನ್ನು ಹೊಸದಾಗಿ ವಿನ್ಯಾಸಗೊಳಿಸಲು ಸುಮಾರು 10 ಕೋಟಿ ರೂಪಾಯಿಗಳ ಯೋಜನೆಯನ್ನು ರೂಪಿಸಿದ್ದು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ, ಅದೇಶ ಬಂದರೆ 2 ತಿಂಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಜಾಲತಾಣವನ್ನು ಮರುವಿನ್ಯಾಸಗೊಳಿಸಲಾಗುವುದು". ಇದು ನಮ್ಮ ನಾಡಿನ ಸಂಸ್ಕೃತಿಯನ್ನು, ಪ್ರಸಿದ್ಧ ಸ್ಥಳಗಳನ್ನು ವಿಶ್ವಕ್ಕೆ ಪರಿಚಯಿಸಲು ಸಂಪರ್ಕ ಸೇತುವಾಗುವ ಜಾಲತಾಣದ ಸ್ಥಿತಿಗತಿ. ಅಂದ ಹಾಗೆ ಒಂದು ವೆಬ್ಸೈಟ್ ಆರಂಭಕ್ಕೆ ಹತ್ತು ಕೋಟಿ ಬೇಕಾ? ಎಂಬ ಪ್ರಶ್ನೆಗೆ ಉತ್ತರ ಮೇಲೆಯೇ ನೀಡಿದ್ದೇನೆ.

ಕಾಡಿನಲ್ಲಿ ಒಂಟಿ ವೈಮಾನಿಕ

ಅಂದು ಬೋಸ್ನಿಯಾ ದೇಶದ ಕಾಡೊಂದರ ಆಗಸದಲ್ಲಿ ಭಾರಿ ಸದ್ದು ಮಾಡುತ್ತಾ ಹೆಲಿಕ್ಯಾಪ್ಟರ್ ಗಳು ಹಾರುತ್ತಿದ್ದವು. ಇತ್ತ ನೆಲದಲ್ಲಿ ಬೋಸ್ನಿಯಾ ಪೊಲೀಸ್, ಮಿಲಿಟರಿ ಪಡೆ, ಅರೆಸೇನಾ ಪಡೆ ಹಾಗು ಇನ್ನು ಅನೇಕ ಬಂದೂಕುಧಾರಿಗಳು ಶೋಧಕಾರ್ಯದಲ್ಲಿ ತೊಡಗಿದ್ದರು. 'ಬೇಟೆ ಸಮೀಪದಲ್ಲೇ ಇದೆ' ಎಂದೂ ಅವರಿಗೆ ಗೊತ್ತಿತ್ತು. ಆದರೆ ನಿಖರ ಸ್ಥಳ ಗೊತ್ತಿರಲಿಲ್ಲ. ಇತ್ತಕಡೆ ಬೇಟೆಗೆ, ತನ್ನ ಸಾವಿನ ಸಮಯ ದೂರವಿಲ್ಲ ಎನ್ನುವುದು ತಿಳಿದಿತ್ತು. ಯಾವ ಕ್ಷಣದಲ್ಲಾದರೂ ಅವರು ತನ್ನನ್ನು ಕಂಡುಹಿಡಿದು, ಸುಟ್ಟುಬಿಡಬಹುದೆಂದು ಗೊತ್ತಿದ್ದರೂ, ಜೀವ ಸಾವನ್ನು ತಪ್ಪಿಸಲು ಹೆಣಗುತ್ತಿತ್ತು. 5 ಮೀಟರ್ ಸಮೀಪದಲ್ಲಿ ಶೋಧ ತಂಡದ ಕೆಲವರು ಕಂಡಾಗ ಜೀವವೇ ಬಾಯಿಗೆ ಬಂದ ಹಾಗಾಯಿತು. ಅಷ್ಟಕ್ಕೂ ಇವರೆಲ್ಲರೂ ಒಂದು ಕಾಡು ಪ್ರಾಣಿಯಂತೆ ಹುಡುಕುತ್ತಿದ್ದದು, ಸ್ಕಾಟ್- ಓ- ಗ್ರಡಿ ಎನ್ನುವ ಅಮೆರಿಕನ್ ಯುದ್ಧ ವಿಮಾನದ ಪೈಲಟ್ ಅನ್ನು.

ಅದು ಬೋಸ್ನಿಯಾ-ಹರ್ಜೆಗೊವಿನಾ; 51,197 Km ^2 ವಿಸ್ತೀರ್ಣದ ಯೂರೋಪ್ ಖಂಡದ ಒಂದು ದೇಶ. 1992ರಲ್ಲಿ ಆರಂಭವಾದ ಜನಾಂಗೀಯ ಹೋರಾಟ ಇನ್ನು ಮುಗಿದಿರಲಿಲ್ಲ. ಸರ್ಬಿಯನ್ ಪ್ರೇರಿತ ಸರ್ಬ್ ಜನಾಂಗದ ಹೋರಾಟಗಾರರು ಬೋಸ್ನಿಯಾದಲ್ಲಿದ್ದ ಬೋಸ್ನಿಯನ್, ಕ್ರೋಟ್ ಜನಾಂಗದ ಮೇಲೆ ಧಾಳಿ ಮಾಡಿದ್ದರು. ಈ ಜನಾಂಗೀಯ ಹೋರಾಟದಲ್ಲಿ ಅನೇಕ ಮುಸ್ಲಿಮರು ಹತರಾದರು. ವಿಶ್ವಸಂಸ್ಥೆಯ ನೇತೃತ್ವದಲ್ಲಿ 1994ರ ಹೊತ್ತಿಗೆ ನ್ಯಾಟೋ ( NATO) ಮಧ್ಯಪ್ರವೇಶಿಸಿ, ಬೋಸ್ನಿಯಾ ನಾಗರೀಕರಿಗೆ ಹಲ್ಲೆ ಮಾಡುತ್ತಿದ್ದ ಸರ್ಬ್ ಪಡೆಗಳ ಮೇಲೆ ಧಾಳಿ ಆರಂಭಿಸಿತು.

ನೀಲನಕ್ಷೆ  

ಅದು ಜೂನ್ ಎರಡು, 1995 ಮಧ್ಯಾಹ್ನ 1.15ರ ಸಮಯ. ಇಟಲಿಯ ಅವಿಯನೋ ವಾಯುಕೇಂದ್ರದಿಂದ ಅಮೆರಿಕನ್ ಸೇನೆಯ ಎರಡು F-16 ಯುದ್ಧ ವಿಮಾನಗಳು ಬೋಸ್ನಿಯಾದ "No Fly Zone'' ಪ್ರದೇಶದತ್ತ ಹೊರಟವು. ಒಂದನ್ನು ರಾಬರ್ಟ್ ರೈಟ್ ಚಲಾಯಿಸುತ್ತಿದ್ದರೆ, ಇನ್ನೊಂದು ಸ್ಕಾಟ್- ಓ- ಗ್ರಡಿಯ ನಿಯಂತ್ರಣದಲ್ಲಿತ್ತು. ಗಂಟೆಗೆ 2000 km ವೇಗದಲ್ಲಿ ಸಾಗಬಲ್ಲ ಕಂಪ್ಯೂಟರ್ ಚಾಲಿತ F- 16 ಯುದ್ಧ ವಿಮಾನ ತನ್ನೆಡೆಗೆ ಹಾರಿಬರುವ ಕ್ಷಿಪಣಿಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿತ್ತು. ಗಂಟೆಗೆ 500 km ವೇಗದಲ್ಲಿ ದೈನಂದಿನ ಹಾರಾಟ ಮಾರ್ಗದಲ್ಲೇ ಎಂಟು ಸಾವಿರ mtr ಎತ್ತರದಲ್ಲೇ ಹಾರುತಿದ್ದರು. 40 km ಸುತ್ತಳತೆಯಲ್ಲೇ ಸರ್ಬ್ ಸೇನೆಯ ಚಟುವಟಿಕೆಗಳನ್ನು ಗಮನಿಸುತ್ತಾ ಸಾಗಿದ್ದರು. ನೆಲದಲ್ಲಿ ದಿನಾಲೂ ಒಂದೇ ಪಥದಲ್ಲಿ ಹಾರುತ್ತ ತಮ್ಮ ಮೇಲೆ ಧಾಳಿ ಮಾಡುತ್ತಿದ್ದ, ವಿಮಾನಗಳನ್ನು ಸರ್ಬ್ ಗಳು ಗಮನಿಸುತ್ತಿದ್ದರು. ಮರ್ಕೋಜಿಕ್ ಗ್ರಾಡ್ ಬಳಿ ಪ್ರತೀಕಾರಕ್ಕಾಗಿ ಕಾಯುತ್ತಿದ್ದ, ಸರ್ಬ್ ಪಡೆಯ ಕರ್ನಲ್ ಬಳಿ ರಷ್ಯನ್ ನಿರ್ಮಿತ SA-6 ಕ್ಷಿಪಣಿ ಇತ್ತು. ಇದರ ರೇಡಾರ್ 75km ದೂರದ 10,000 ಮೀಟರ್ ಎತ್ತರದಲ್ಲಿದ್ದ ವಿಮಾನಗಳನ್ನು ಗುರುತಿಸುವ ಸಾಮರ್ಥ್ಯವಿತ್ತು. 3 ಶಕ್ತಿ ಶಾಲಿ ಆಟೋ ಡಿಟೆಕ್ಟೆಡ್ ಕ್ಷಿಪಣಿಯಿರುವ ಇದನ್ನು "Wings Of Death'' ಎಂದು ಕರೆಯುತ್ತಿದ್ದರು.

ಸೋವಿಯತ್ ನಿರ್ಮಿತ SA-6 ಕ್ಷಿಪಣಿ ವಾಹಕ 


ಮಧ್ಯಾಹ್ನ 2.50 ರ ಸಮಯ, ಎರಡು ವಿಮಾನಗಳು 2 km ಅಂತರದ ನಡುವೆ ಹಾರುತ್ತಿದ್ದಾಗ, ರಾಬರ್ಟ್ ರೈಟ್ ನ ವಿಮಾನಕ್ಕೆ ರೇಡಾರ್ ಒಂದರ ತರಂಗಗಳು ತಲುಪಿದವು. ನೆಲದ ಮೇಲೆಲ್ಲೋ ವಿಮಾನ ನಿರೋಧಕ ಕ್ಷಿಪಣಿ ಇದೆ ಎಂದು ರೈಟ್ ಅಂದಾಜಿಸಿ ಅದನ್ನು ಸ್ಕಾಟ್- ಓ- ಗ್ರಡಿಗೆ ತಿಳಿಸಿದರು. ಅವರ ಊಹೆ ಸರಿಯಾಗಿತ್ತು, ಮರುಕ್ಷಣದಲ್ಲಿ ರಾಡಾರ್ ಸಂಕೇತ ಸ್ಥಗಿತವಾಯಿತು. ನೆಲದಲ್ಲಿ ಕರ್ನಲ್ ಅಪಾಯಕಾರಿ ಆಟಕ್ಕೆ ಕೈ ಹಾಕಿದ್ದರು. ಕರ್ನಲ್ ನಿರಂತರವಾಗಿ ರೇಡಾರ್ ನ್ನು ಚಾಲುಗೊಳಿಸಿದ ಪಕ್ಷದಲ್ಲಿ ಮೇಲೆ ವಿಮಾನದಲ್ಲಿ ರೇಡಾರ್ ಪ್ರತಿಬಂಧಕ ಇದನ್ನು ಗ್ರಹಿಸಬಹುದು. ಹೀಗಾದಾಗ ವಿಮಾನದ ಬಾಂಬ್ ರೇಡಾರ್ ನ್ನು ನಾಶಮಾಡಬಹುದು. ಇದರ ಬದಲಾಗಿ ರಾಡಾರ್ ಆನ್ ಮಾಡದೆಯೇ ಕ್ಷಿಪಣಿಯೊಂದನ್ನು ಮೇಲಕ್ಕೆ ಹಾರಿಸಿದರು. ಕೇವಲ ಹತ್ತು ಸೆಕೆಂಡನಲ್ಲಿ ಅದು ಎರಡು ವಿಮಾನದ ನಡುವೆ ಸ್ಫೋಟಗೊಂಡಿತ್ತು. ಮೊದಲನೇ ಕ್ಷಿಪಣಿ ಹಾರಿದ 5 ಸೆಕೆಂಡ್ ನಲ್ಲಿ ರಾಡಾರ್ ಆನ್ ಮಾಡಿ ಇನ್ನೊಂದು ಕ್ಷಿಪಣಿ ಹಾರಿಸಿದ್ದರು. ತನ್ನೆಡೆಗೆ ಬರುತ್ತಿದ್ದ ಮೊದಲನೇ ಕ್ಷಿಪಣಿಯಿಂದ ಬಚಾವಾದ ಸ್ಕಾಟ್ ಗೆ ಈಗ ಪಾರಾಗಲು ಸಮಯವೇ ಉಳಿದಿರಲಿಲ್ಲ. ಕ್ಷಿಪಣಿ ಸ್ಪೋಟಕ್ಕೆ ವಿಮಾನ ಹೋಳಾಗಿ ಪೈಲಟ್ ಸ್ಕಾಟ್- ಓ- ಗ್ರಡಿ ಹೊರ ಹಾರಿದ್ದರು. ಗಂಟೆಗೆ 190 km ವೇಗದಲ್ಲಿ ಭೂಮಿಗೆ ಧಾವಿಸುತ್ತಿದ್ದ ಅವರು, 4000 ಮೀಟರ್ ಎತ್ತರಕ್ಕೆ ತಲುಪಿದಾಗ ಪ್ಯಾರಾಚೂಟ್ ಬಿಚ್ಚಿದರು. ಪ್ಯಾರಾಚೂಟ್ ತೆರೆದುಕೊಳ್ಳದ ಪಕ್ಷದಲ್ಲಿ, ಅವರು ಭೂಮಿಗೆ ಅಪ್ಪಳಿಸುವ ಸಂಭವವಿತ್ತು. ರಾಬರ್ಟ್ ರೈಟ್ ತನ್ನ ಸಹಚರನ ವಿಮಾನ ನೆಲಕ್ಕೆ ಬಿದ್ದ ಸಂಗತಿಯನ್ನು ವಾಯುನೆಲೆಗೆ ಮುಟ್ಟಿಸಿದರು .

ಭೂಮಿಗೆ ಬೀಳುತ್ತಿದ್ದ ಪೈಲಟ್ ಗೆ ತಾನು ಸರ್ಬ್ ಸೇನೆಯ ನಿಯಂತ್ರಣದಲ್ಲಿದ್ದ ಪ್ರದೇಶಕ್ಕೆ ಬೀಳುತ್ತಿದ್ದೇನೆಂದು ಗೊತ್ತಾಯಿತು. ಅವರ ಕೈಗೆ ಸಿಕ್ಕು ಬಿದ್ದರೆ, ತನ್ನನ್ನು ಉಳಿಸಲಾರರೆಂದು ಗೊತ್ತಾಯಿತು. ಸರ್ಬ್ ಅರೆಸೇನಾಪಡೆಗಳು ಯುದ್ಧ ಕಾಲದ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ವಾಹನಗಳಲ್ಲಿ ಪ್ಯಾರಾಮಿಲಿಟರಿ ಪಡೆಗಳು ಇವರತ್ತ ಧಾವಿಸುತ್ತಿದ್ದರು, ಆದರೆ ಆಗ ಬೀಸಿದ ಗಾಳಿ ಇವರನ್ನು ಸ್ವಲ್ಪ ದೂರ ಎಳೆದೊಯ್ಯಿತ್ತು. 3.35ಕ್ಕೆ ನೆಲಕ್ಕೆ ಬಿದ್ದ ತಕ್ಷಣ ಪ್ಯಾರಾಚೂಟ್ ನಿಂದ ಕಳಚಿಕೊಂಡು ಓಡಲೂ ಹವಣಿಸಿದರು. ಕೆಲವೇ ಕ್ಷಣಗಳಲ್ಲಿ ಸರ್ಬ್ ಪಡೆ ಇವರನ್ನು ಹುಡುಕಿಕೊಂಡು ಬರುತ್ತಿದ್ದರು. 200 mtr ಓಡಿದ ನಂತರ ನೆನಪಾಯಿತು. ತಮ್ಮ ಸಲಕರಣೆ ಚೀಲವನ್ನು ಅಲ್ಲೇ ಮರೆತು ಬಂದಿದ್ದರು. ತಿರುಗಿ ಹೋಗುವಂತೆ ಇರಲಿಲ್ಲ, ಅದಾಗಲೇ ಪೊಲೀಸರು ಆ ಸ್ಥಳವನ್ನು ತಲುಪಿಯು ಆಗಿತ್ತು. ಅಲ್ಲೇ ಮರೆಯಲ್ಲೇ ಅಡಗಿಕೊಂಡು ಗಮನಿಸತೊಡಗಿದರು.........

                                                                                                               -Tharanatha Sona